Saturday 7 February 2015








·      ಬ್ರಿಟಿಷರ ಕೈಯಿಂದ ನಮ್ಮ ದೇಶವನ್ನು ಮುಕ್ತಗೊಳಿಸಿದ ಗಾಂಧೀಜಿಯ  ಇನ್ನೊಂದು ಕನಸು ಭಾರತ ದೇಶವು ಕಸ ಮತ್ತು ಕೊಳಕಿನಿಂದ ಮುಕ್ತವಾಗಿರಬೇಕೆಂಬುದಾಗಿತ್ತು. 

ಇದನ್ನು ನೆನಸಾಗಿಸಲು ಇಲ್ಲಿಂದಲೇ ಆರಂಭಿಸುವಿರಾ?

·       "ನಾನು ಎಲ್ಲೆಂದರಲ್ಲಿ ಕಸ ಬಿಸಾಡುವುದಿಲ್ಲ.ಪೆಪ್ಸಿ, ಮಜ್ಜಿಗೆ,ಉಪ್ಪಿನಕಾಯಿ ಇತ್ಯಾದಿಗಳ.... ತೊಟ್ಟೆಗಳನ್ನು ಕ್ಲಾಸಿನಲ್ಲಿ/ವರಾಂಡದಲ್ಲಿ/ಶಾಲೆಗೆ ಬರುವ ದಾರಿಯಲ್ಲಿ ಎಸೆಯುವುದಿಲ್ಲ" ಎಂಬ ಪ್ರತಿಜ್ಞೆ ಮಾಡಿ, ಅದರಂತೆ ನಡೆಯಿರಿ.
·      ಕೊಳೆಯನ್ನು ಸ್ವಚ್ಛಗೊಳಿಸುವುದು ಒಂದು ಕೆಲಸವಾದರೆ ಕಸದ ಉತ್ಪತ್ತಿಯನ್ನು ಕಡಿಮೆ ಮಾಡುವುದೂ ಸ್ವಚ್ಛತೆಯ ಭಾಗವೇ ಆಗಿದೆ
·      ಪ್ರತಿದಿನ ಮುಂಜಾನೆಯ ಪ್ರಾರ್ಥನೆಯ/ಸ್ಟಡಿ ಬೆಲ್  ಮೊದಲು ಕ್ಲಾಸನ್ನು/ಶಾಲಾ ಮೈದಾನವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು     

 ಸಾರ್ವಜನಿಕ ಸ್ಥಳವೆಂದರೆ ’ನಮ್ಮ ಮನೆಯ ಅಂಗಳ’ ಎಂಬ ಭಾವನೆ ನಮ್ಮ ವಿದ್ಯಾರ್ಥಿಗಳಲ್ಲಿ ಬರಬೇಕು.
ಅಂಗಡಿ ಬುಡದಲ್ಲಿ,ರಸ್ತೆಯಲ್ಲಿ ಚಾಕಲೇಟ್/ಲೇಸ್ ಇತ್ಯಾದಿ ತಿಂದು ಅದರ ಕವಚಗಳನ್ನು ಅಲ್ಲೇ ಎಸೆದು ಬಿಡುವ ಬದಲು ಅದನ್ನು ಕಸದಬುಟ್ಟಿಯಲ್ಲಿ ಹಾಕಬೇಕು.
ಶೌಚಾಲಯಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.
ರಸ್ತೆಯಲ್ಲಿ, ಶಾಲಾ ವರಾಂಡದಲ್ಲಿ, ಜನ ಓಡಾಡುವ ಜಾಗದಲ್ಲಿ ಉಗುಳುವುದು ನಾವು ಇತರರಿಗೆ ತೋರುವ ಅಗೌರವ.

No comments:

Post a Comment